ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ತಾಣayurveda

ಒಂದು ಕಡೆ ಆಯುರ್ವೇದವೆಂದರೆ ಬರಿಯ ಗಿಡಮೂಲಿಕೆಯ ಪುಡಿವೈದ್ಯ ಅಥವಾ ಬರಿಯ ಮಾಲೀಶ್ (massage) ಚಿಕಿತ್ಸೆ ಎಂದೆಲ್ಲ ತಪ್ಪು ಕಲ್ಪನೆಗಳಿದ್ದರೆ ಇನ್ನೊಂದು ಕಡೆ ಆಯುರ್ವೇದದ ಬಗ್ಗೆ ನಿಜವಾದ ಆಸಕ್ತಿ, ಕುತೂಹಲ, ಅರಿವು ಉಂಟಾಗುತ್ತಿದೆ. ಇಂತಹ ಪರ್ವಕಾಲದಲ್ಲಿ ಕನ್ನಡಿಗರಿಗೆ ಆಯುರ್ವೇದದ ಪರಿಚಯ ಹಾಗೂ ತಿಳುವಳಿಕೆ ನೀಡುವ ಉದ್ದೇಶದಿಂದ ಈ ತಾಣವನ್ನು ಆರಂಭಿಸಿದ್ದೇನೆ.

ಆಯುಷ್ಕಾಮೀಯವೆಂಬುದು ಆಚಾರ್ಯ ವಾಗ್ಭಟರ ಆಯುರ್ವೇದ ಗ್ರಂಥದ ಮೊದಲ ಅಧ್ಯಾಯದ ಹೆಸರು. ಉತ್ತಮ ಆರೋಗ್ಯದಿಂದ ಕೂಡಿದ ಪರಿಪೂರ್ಣ ಮತ್ತು ದೀರ್ಘ (?) “ಆಯುಸ್ಸನ್ನು ಬಯಸುವವರಿಗಾಗಿ” ಎಂಬುದು ಇದರ ಅರ್ಥ.

ಕಾಲಕಾಲಕ್ಕೆ ಆಯುರ್ವೇದ ವಿಚಾರಗಳನ್ನು ಲೇಖನ, ಚಿತ್ರ, ದೃಶ್ಯಾವಳಿಗಳು ಮುಂತಾದವುಗಳಿಂದ ಪ್ರಸ್ತುತಪಡಿಸಲಿದ್ದೇನೆ.

ಸ್ನೇಹಿತರೇ, ಬನ್ನಿ, ಬರುತ್ತಿರಿ.

ಧನ್ಯವಾದಗಳು

ಪ್ರಸನ್ನ